ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Sunday, 30 November 2008

ಮೂರ್ಖರಿಗೆ ಬುದ್ಧಿಮಾತು...!

ಮೂರ್ಖಂಗೆ ಬುದ್ಧಿಯನು | ನೂರ್ಕಾಲ ಹೇಳಿದರೆ
ಗೋರ್ಕಲ್ಲುಗಳನು ನೆನೆಯಿಕ್ಕಿ
ಹಾಲೊಳಗೆ ನೂರ್ಕಿಕೊಂಡಂತೆ ಸರ್ವಙ||
- ಸರ್ವಙ

ತಾತ್ಪರ್ಯ: ಮೂರ್ಖರಿಗೆ ಬುದ್ಧಿಯನ್ನು ಎಷ್ಟು ಕಾಲದವರಗೆ ಹೇಳಿದರೂ ಅದು ಉಪಯೋಗಕ್ಕೆ ಬಾರದು. ಕಠಿಣವಾದ ಕಲ್ಲುಗಳನ್ನು ನೀರಿನಲ್ಲಿ ನೆನೆಹಾಕಿ ನಂತರ ಹಾಲಿನೊಂದಿಗೆ ಅರೆಯುವುದರಿಂದ ಆಗುವ ಪ್ರಯೋಜನವೇನು? ಎಷ್ಟು ಕಾಲ ಕಲ್ಲು ನೀರಿನಲ್ಲಿ ಇದ್ದರೂ ನೆನೆದು ಮೃದುವಾಗಬಲ್ಲದೇ?

No comments: