ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Sunday 28 December 2008

ಹುಟ್ಟು.. ಸಾವು..!

ಪುನರಪಿ ಜನನಂ ಪುನರಪಿ ಮರಣಂ
ಪುನರಪಿ ಜನನೀ ಜಠರೇ ಶಯನಮ್
ಇಹಸಂಸಾರೇ ಬಹುದುಸ್ತಾರೇ
ಕೃಪಯಾಪರೇ ಪಾಹಿ ಮುರಾರೇ ||

- ಆನಂದಗಿರಿ (ಶಂಕರ ಭಗವತ್ಪಾದರ ಶಿಷ್ಯರು)

ತಾತ್ಪರ್ಯ: ಹುಟ್ಟು, ಸಾವು ಇವು ಒಂದರ ಹಿಂದೊಂದು ಬರುತ್ತಲೇ ಇರುತ್ತದೆ. ಹುಟ್ಟಿದವನು ಸಾಯಲೇಬೇಕು. ಸತ್ತವನು ಮತ್ತೊಮ್ಮೆ ಹುಟ್ಟುತ್ತಾನೆ. ಹೀಗೆ ತಾಯ ಗರ್ಭದಲ್ಲಿ ನಾವು ಮತ್ತೆ ಮತ್ತೆ ಹುಟ್ಟಿ ಆಶ್ರಯಿಸಿ, ಆನೇಕ ದುಃಖಗಳನ್ನು ಅನುಭವಿಸಬೇಕಾಗುತ್ತದೆ. ಈ ದುಸ್ತಾರವಾದ ಸಂಸಾರ ದುಃಖವನ್ನು ಬಗೆಹರಿಸಬೇಕಾದರೆ ಇರುವ ಒಂದೇ ಮಾರ್ಗ ಎಂದರೆ ಭಗವಂತನ ಕೃಪೆ. ಆದುದರಿಂದ "ಹೇ ಮುರಾರಿ! " ನನ್ನನ್ನು ಸಲಹು ಎಂದು ಆನಂದಗಿರಿಯವರು ಇಲ್ಲಿ ಬೇಡುತ್ತಾರೆ.

No comments: