ಸಾರ ಸಜ್ಜನ ಸಂಗವ ಮಾಡುವುದು, ದೂರ ದುರ್ಜನರ ಸಂಗ ಬೇಡವಯ್ಯ.
ಆವ ಹಾವಾದರೇನು ? ವಿಶವೊಂದೇ, ಅಂತವರ ಸಂಗ ಬೇಡವಯ್ಯ,
ಅಂತರಂಗ ಶುದ್ದವಲ್ಲದವರ ಸಂಗ ಸಿಂಗಿ, ಕಾಳಕೂಟ ವಿಷವೋ, ಕೂಡಲ ಸಂಗಮದೇವಾ ||
- ಬಸವಣ್ಣ
ತಾತ್ಪರ್ಯ: ಒಳ್ಳೆಯ ಜನರ ಸಂಪರ್ಕವನ್ನು ಮಾಡುವುದು ಸತ್ವ ಪೂರ್ಣವಾಗಿದೆ. ದುಷ್ಟ ಜನರ ಸಂಪರ್ಕವನ್ನು ಮಾಡಬಾರದು. ಅವರಿಂದ ದೂರವಿರಬೇಕು. ಯಾವ ಪ್ರಕಾರದ ಸರ್ಪವಾದರೇನು ? ಕಚ್ಚಿದರೆ ವಿಷವು ಒಂದೇ ಆಗಿರುತ್ತದೆ. ಅಂತಹ ವಿಷಯುಕ್ತ ಜನರ ಸಂಪರ್ಕವೇ ಬೇಡ. ಕೂಡಲ ಸಂಗಮದೇವರ ಅಂತರಂಗವಿಲ್ಲದವರ ಗೆಳೆತನವು "ಸಿಂಗಿ" ಎಂಬ ಒಂದು ಬಗೆಯ ಘೋರ ವಿಷವಾಗಿದೆ.
ನಮಸ್ಕಾರ...!
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!
ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್
ಈ ತಾಣದಲ್ಲಿ ತಮಗೆ,
ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು
ಸವಿಯಲು ದೊರೈಯುತ್ತದೆ !!!
..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!
ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!
Sunday, 28 December 2008
Subscribe to:
Post Comments (Atom)
No comments:
Post a Comment