ಜೀವಿಯ ಆಧ್ಯಾತ್ಮಿಕ ಜೀವನ ಒಂದು ತಕ್ಕಡಿಯಂತೆ. ಯಾವ ರೀತಿ ತಕ್ಕಡಿಯು ಭಾರವಾದ ಕಡೆಗೆ ತೂಗುತ್ತದೆಯೋ, ಅದೇ ರೀತಿ ಯಾವ ಮನುಷ್ಯನು ಪ್ರಾಪಂಚಿಕ ಸುಖ ಮತ್ತು ಭೋಗಗಳನ್ನು ಬಯಸಿತ್ತಾನೋ ಅವನು ಭೂಮಿಯ ಕಡೆಗೆ ತೂಗುತ್ತಾನೆ. ಅವನು ಮತ್ತೆ ಇದೇ "ಪುನರಪಿ ಜನನಮ್ ಪುನರಪಿ ಮರಣಂ" ಎಂಬ ಕಾಲಚಕ್ರದಲ್ಲಿ ಸಿಕ್ಕಿ ಬೀಳುತ್ತಾನೆ.
ಯಾವ ಜೀವಿಯು ಪ್ರಪಂಚದ ಸುಖ ಮತ್ತು ಭೋಗಗಳಿಗೆ ಮಾರು ಹೋಗದೆ ಇರುತ್ತಾನೋ, ಅವನು ಭೂಮಿಯ ಕಡೆಗೆ ತೂಗದೆ, ಪರಮಾತ್ಮನ ಸನ್ನಿಧಿಯನ್ನು ಸೇರುತ್ತಾನೆ. ಅವನಿಗೆ ಈ ಕಾಲಚಕ್ರದ ಭಯವಿರುವುದಿಲ್ಲ. ಅವನು ಮುಕ್ತಿಯನ್ನು ಹೊಂದುತ್ತಾನೆ. ಅವನು ಮುಕ್ತ ಜೀವಿ!!!.
- ರಾಮಕೃಷ್ಣ ಪರಮಹಂಸರು
ನಮಸ್ಕಾರ...!
ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!
ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್
ಈ ತಾಣದಲ್ಲಿ ತಮಗೆ,
ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು
ಸವಿಯಲು ದೊರೈಯುತ್ತದೆ !!!
..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!
ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!
Thursday, 2 July 2009
Subscribe to:
Post Comments (Atom)
No comments:
Post a Comment