ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Saturday 3 January 2009

ಡಂಭಾಚರ ಮತ್ತು ಸದ್ಭಕ್ತಿ

ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ,
ನೀಡಿ ನೀಡಿ ಕೆಟ್ಟರು ನಿಜವಲ್ಲದೆ
ಮಾಡುವ ನೀಡುವ ಗುಣವುಳ್ಳವರ್‍ಏ ಕೂಡಿಕೊಂಬ ನಮ್ಮ ಕೂಡಲ ಸಂಗಮದೇವ ||

-ಬಸವಣ್ಣ

ತಾತ್ಪರ್ಯ: ಈ ಪ್ರಪಂಚದಲ್ಲಿ ಡಾಂಭಿಕ ತನದಿಂದ ಪರಿಶುದ್ಧ ಮನಸಿಲ್ಲದೆ, ಯಾವುದೋ ಆಮಿಷಕ್ಕೆ ಒಳಗಾಗಿ, ದಾನ ಶೂರ ನೆನಿಸಿಕೊಳ್ಳುವುದಕ್ಕೋಸ್ಕರ ದಾನ, ಧರ್ಮ ಮಾಡಿ, ಬರಿ ತೊರುವಿಕೆಗಾಗಿ ಭಕ್ತಿ, ವಿಶ್ವಾಸ, ನಂಬಿಕೆಗಳ ನಟನೆ ಮಾಡಿ ಹಣ ಮತ್ತು ಸಮಯ ವ್ಯರ್ಥ ಮಾಡುತ್ತಾ ಕೆಟ್ಟು ಹೋದರೇ ವಿನಹ ಅವರಿಗೆ ಎಂದಿಗೂ ನಿಜವಾದ ಭಗವಂತನ ಕೃಪೆ ದೊರೆಯುವುದಿಲ್ಲ. ಯಾವ ಜೀವಿಯು ಯಾವುದೇ ಫಲದ ನಿರೀಕ್ಷೆಗಳಿಲ್ಲದೆ ಮನಃ ಪೂರ್ವಕವಾಗಿ ದಾನ, ಧರ್ಮ, ಭಕ್ತಿ, ಕರ್ಮಗಳನ್ನು ಶ್ರದ್ಧೆ ವಹಿಸಿ ಮಾಡುತ್ತಾನೊ, ಅಂತವರಿಗೆ ನಮ್ಮ ಕೂಡಲ ಸಂಗಮದೇವ ಒಲಿಯುತ್ತಾನೆ ಮತ್ತು ಅಂತಹ ಸತ್-ಭಕ್ತರನ್ನು ಸದಾ ಕೈ ಹಿಡಿದು ಕಾಪಾಡುತ್ತಾನೆ.

No comments: