ನಮಸ್ಕಾರ...!

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಬದುಕು ಬಾಳಿನ ನಿಧಿಯು ಸದಭಿಮಾನದ ಗೂಡು!!!


ರಚನೆ: ಹುಯಿಗೋಳ ನಾರಾಯಣ ರಾವ್, ಸಂಗೀತ: ಪಿ. ಕಾಳಿಂಗ ರಾವ್

ಈ ತಾಣದಲ್ಲಿ ತಮಗೆ,

ಕನ್ನಡದ ಮೇರು ಕೃತಿಗಳ ಆಯ್ದ ಕೆಲವು ಭಾಗಗಳು, ಕನ್ನಡ ನಾಡು, ನುಡಿ, ಜಲ,ಪರಿಸರ ಸೊಬಗು ಇತ್ಯಾದಿಗಳ ವಿಶ್ಲೇಷಣೆ, ಕನ್ನಡ ಜನ, ಭಾಷೆ, ಸಂಸ್ಕೃತಿ,ಸಾಹಿತ್ಯ,ಸಂಗೀತ,ಪರಂಪರೆಗಳ ಕಿರು ಪರಿಚಯಗಳು,
ಭೌತಿಕ, ಆಧ್ಯಾತ್ಮಿಕ ವಿಷಯಗಳು


ಸವಿಯಲು ದೊರೈಯುತ್ತದೆ !!!

..ಜೊತೆಗೆ ನನ್ನ ಕೆಲವು ವಯಕ್ತೀಕ ಅಭಿಪ್ರಾಯಗಳು!!


ಸಿರಿಗನ್ನಡಂ ಗೆಳ್ಗೆ ಸಿರಿಗನ್ನಡಂ ಬಾಳ್ಗೆ!!

Saturday 13 December 2008

ಅಪಾತ್ರ ದಾನ

ಶ್ವಾನ ತೆಂಗಿನಕಾಯ | ತಾನು ಮೆಲ್ಲ ಬಲ್ಲುದೇ
ಙ್ನಾನವಿಲ್ಲದಗೆ ಉಪದೇಶ - ವಿತ್ತಡೆ
ಹಾನಿ ಕಂಡಯ್ಯ ಸರ್ವಙ್ ||
- ಸರ್ವಙ್

ತಾತ್ಪರ್ಯ: ನಾಯಿಗೆ ತೆಂಗಿನಕಾಯಿ ಬುರುಡೆ ಸಿಕ್ಕಿದರೂ ಅದರ ರುಚಿಯನ್ನು ಪಡೆಯಲು ಅದು ಹೇಗೆ ಅಸಮರ್ಥವಾಗುತ್ತದೆಯೋ ಹಾಗೆಯೇ ಅಙ್ನಾನಿಗೆ ಉಪದೇಶ ನೀಡಿದರೆ, ಅದು ವ್ಯರ್ಥ ಮತ್ತು ನಿರರ್ಥಕ. ಇದನ್ನೆ ಭಗವಾನ್ ಶ್ರ್‍ಈ ಕೃಷ್ಣ ಭಗವತ್ಗೀತೆಯಲ್ಲು ಕೂಡ "ಅಪಾತ್ರರಿಗೆ ದಾನ ಮಾಡಬಾರದು" ಅಂತ ಹೇಳಿದ್ದಾನೆ.

No comments: